ಪಬ್ಲಿಕ್ ಅಲರ್ಟ್
ಮೈಸೂರು: ಬಲಿಜ ವಿದ್ಯಾರ್ಥಿನಿಲಯದ ಮೊದಲ ಹಂತದ ಕಟ್ಟಡವನ್ನು ನಿರ್ಮಾಣಕ್ಕೆ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದುಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಮತ್ತು ಬೆಂಗಳೂರು ಎಂ.ಎಸ್.ರಾಮಯ್ಯ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಆರ್.ಸೀತಾರಾಂ ಹೇಳಿದರು.
ನಗರದ ಸರಸ್ವತಿಪುರಂನಲ್ಲಿರುವ ಬಣಜಿಗ ಸಮುದಾಯದ ವಿದ್ಯಾರ್ಥಿನಿಲಯದಲ್ಲಿ ಶ್ರೀ ಯೋಗಿನಾರೇಯಣ ಬಣಜಿಗ (ಬಲಿಜ) ಸಂಘದ ವತಿಯಿಂದ ಭಾನುವಾರ ನಡೆದ ಪ್ರತಿಭಾ ಪುರಸ್ಕಾರ-ವಧು ವರರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ಹಲವಾರು ವರ್ಷಗಳಿಂದ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದೇನೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಸುಸಜ್ಜಿತ ವಿದ್ಯಾರ್ಥಿನಿಲಯ ನಿರ್ಮಿಸಿ ಸಮುದಾಯದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಈಗ ಮೈಸೂರಿನ ವಿದ್ಯಾರ್ಥಿನಿಲಯದ ಕಟ್ಟಡವನ್ನು ಅಭಿವೃದ್ಧಿ ಪಡಿಸಲಾಗುವುದು. ಮೊದಲ ಮಹಡಿಯ ಕೊಠಡಿಗಳ ನಿರ್ಮಾಣಕ್ಕೆ ಸಂಪೂರ್ಣ ಬೆಂಬಲ ಕೊಡಲಾಗುವುದು ಎಂದು ಹೇಳಿದರು.
ಸಮುದಾಯದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವು ನೀಡುವುದು ಸಮುದಾಯಕ್ಕೆ ನಾವು ಮಾಡುತ್ತಿರುವ ಸಾರ್ಥಕದ ಸೇವೆ ಎಂದುಕೊಂಡಿದ್ದೇನೆ. ಸಮುದಾಯದ ಹಣವಂತರು ಧನ ಸಹಾಯ ಮಾಡಬೇಕು. ಮದ್ಯಮ ವರ್ಗದವರು ತಮ್ಮ ಕೈಲಾದಷ್ಟು ಸಹಕಾರ ನೀಡಬೇಕು ಎಂದು ಹೇಳಿದರು.
ಮೈಸೂರಿನ ಜಿಲ್ಲಾ ಬಣಜಿಗ (ಬಲಿಜ) ಸಂಘದ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ. ಪ್ರಾಮಾಣಿಕವಾಗಿ ಸಮುದಾಯದ ಕೆಲಸವನ್ನು ಮಾಡು ಸಂಘ-ಸಂಸ್ಥೆಗಳಿಗೆ ಸಂಪೂರ್ಣ ಪ್ರೋತ್ಸಾಹ ನೀಡಬೇಕಾದ ಸಮುದಾಯದ ಪ್ರತಿಯೊಬ್ಬರ ಕರ್ತವ್ಯ. ಬೆಳೆಯುತ್ತಿರುವ ಸಮುದಾಯಕ್ಕೆ ಹೆಚ್ಚಿನ ಪಾಲುದಾರಿಕೆ ಮಾಡಬೇಕು. ಈ ಕಟ್ಟಡದ ಮೇಲೆ ಹಳೆ ಕಟ್ಟಡವಾಗಿದೆ. ಹೆಚ್ಚಿನ ಪ್ರೋತ್ಸಾಹ ಮಾಡುತ್ತೇವೆ. ಯುವ ಪೀಳಿಗೆಗೆ ಪ್ರೋತ್ಸಾಹ ನೀಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಶ್ರೀ ಯೋಗಿನಾರಾಯಣ ಬಣಜಿಗ(ಬಲಿಜ) ಸಂಘದ ಅಧ್ಯಕ್ಷ ಎಂ.ನಾರಾಯಣ ಮಾತನಾಡಿ, ದಶಕಗಳಿಂದ ಸಂಘದ ಅಭಿವೃದ್ಧಿ ಸಲಹೆ ಸಹಕಾರವನ್ನು ನೀಡುತ್ತ ಬರಲಾಗುತ್ತಿದೆ. ಎಚ್.ಎ.ವೆಂಕಟೇಶ್ ಸಮುದಾಯದ ಮೇಲೆ ಕಾಳಜಿ ಹೊಂದಿದ್ದಾರೆ. ಸಂಘದ ನಿರ್ದೇಶಕರ ಸಹಕಾರದಿಂದ ಬಣಜಿಗ ಸಂಘವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಜಿಲ್ಲೆಯಲ್ಲಿ ಸಮುದಾಯವೂ ಹಿಂದುಳಿದಿದೆ. ಕೈಗಾರಿಕೋದ್ಯಮಿ, ಸ್ಥಿತಿವಂತರು ಈ ಭಾಗದಲ್ಲಿ ಇಲ್ಲ. ರೈತಾಪಿ ವರ್ಗದವರೇ ಹೆಚ್ಚು ಇದ್ದು, ಸಂಸಾರ ನಿರ್ವಹಣೆ ಮಾಡಲು ಕಷ್ಟವಾಗಿದೆ. ಹೀಗಿದ್ದರೂ ಸಮುದಾಯದ ಏಳಿಗೆಗೆ ಹಣ ನೀಡುತ್ತಿರುವುದು ಶ್ಲಾಘನೀಯ. ನಾನು ಇರುವರೆಗೂ ಸಮಾಜದ ಅಭಿವೃದ್ಧಿಗೆ ಶ್ರಮಿಸುವೆ ಎಂದು ಹೇಳಿದರು.


ಪ್ರಸ್ತಾವಿಕವಾಗಿ ಮಾತನಾಡಿದ ಅರಗು ಮತ್ತು ಬಣ್ಣದ ಕಾರ್ಖಾನೆ ಮಾಜಿ ಅಧ್ಯಕ್ಷ ಎಚ್.ಎ.ವೆಂಕಟೇಶ್, ಅಧಿಕಾರಿ ವರ್ಗದ ಪ್ರಮಾಣಿಕತೆಯಿಂದ ಜಿಲ್ಲೆಯಲ್ಲಿ ಅತ್ಯುತ್ತಮ ಕೆಲಸ ಮಾಡಲು ಸಹಕಾರವಾಗಿದೆ. ಈ ಕಟ್ಟಡದ ನಿರ್ವಹಣೆಗೆ ಡಾ.ಎಂ.ಆರ್.ಸೀತಾರಾಂ ಅವರು ದಯೆ ತೋರಬೇಕು ಎಂದು ಮನವಿ ಮಾಡಿದೆ. ಅದಕ್ಕೆ ಅವರು ಸಮ್ಮತಿ ಸೂಚಿಸಿ ಭರವಸೆ ನೀಡಿದ್ದಾರೆ. ವಸತಿ ನಿಲಯದ ಸಂಪೂರ್ಣ ನಿರ್ವಹಣೆ ಮಾಡಿಕೊಡಬೇಕು. ಆ ಮೂಲಕ ಈ ಭಾಗದಲ್ಲಿ ಸೀತಾರಾಂ ಅವರ ಹೆಸರು ಸದಾ ಉಸಿರಾಗಲಿದೆ ಎಂದು ಹೇಳಿದರು.
ಇದೇ ವೇಳೆ ೭೦ಕ್ಕೂ ಹೆಚ್ಚು ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿಶೇಷ ಆಹ್ವಾನಿತರಾಗಿ ಮಂಡ್ಯ ಸಂಘದ ಅಧ್ಯಕ್ಷ ಕೆ.ಎನ್.ಮೋಹನ್ ಕುಮಾರ್, ದಾಸ ಬಣಜಿಗರ ಸಂಘದ ಚಾಮರಾಜನಗರ ಅಧ್ಯಕ್ಷ ಸಿ.ಜಿ.ಚಂದ್ರಶೇಖರ್, ಪಾಂಡುರಂಗ, ಆರ್.ಬಾಲರಾಜು, ಎಂ.ನಾಗರಾಜು, ಟಿ.ಎಸ್.ರಮೇಶ್ ಆಗಮಿಸಿದ್ದರು. ಸಂಘದ ಅಧ್ಯಕ್ಷ ಎಂ.ನಾರಾಯಣ, ಉಪಾಧ್ಯಕ್ಷ ಜಿ.ರಮೇಶ್, ಪ್ರಧಾನ ಕಾರ್ಯದರ್ಶಿ ಹೆಚ್.ಆರ್. ಗೋಪಾಲಕೃಷ್ಣ, ಸಹಕಾರ್ಯದರ್ಶಿ ಚಲುವರಾಜು, ಖಜಾಂಚಿ ಕೆ. ಚಂದ್ರಶೇಖರ, ಲೆಕ್ಕಾಪರಿಶೋಧಕ ಡಿ.ನಾಗರಾಜ, ನಿರ್ದೇಶಕರಾದ ಗೋವಿಂದರಾಜು, ಹೆಚ್.ವಿ.ನಾಗರಾಜ, ಹೆಚ್.ಎಸ್. ಕೃಷ್ಣಪ್ಪ, ಎನ್.ಹೇಮಂತಕುಮಾರ್, ಹೆಚ್.ಕೆ. ಜಗನಾಥ್, ಡಾ.ಟಿ.ರಮೇಶ್, ಜಿ.ವೇಣುಗೋಪಾಲ್, ಡಾ.ಎಸ್.ಕೃಷ್ಣಪ್ಪ, ಕೆ.ಎನ್. ವಿಜಯಕೊಪ್ಪ, ಗೋಪಾಲಕೃಷ್ಣ, ಕುರಟ್ಟಿ ಹೊಸೂರು, ಎನ್.ವಿಜಯಕುಮಾರ್, ನಂಜಪ್ಪ, ಕೆ.ಸಿ.ಪ್ರಕಾಶ್, ಎಂ.ಆರ್.ಗಿರೀಶ್, ಬಿ.ಎಸ್. ಗುರುಮೂರ್ತಿ, ಎ. ಚೆನ್ನಕೇಶವ, ಬಿ.ಕೆ. ಸುರೇಶ್, ಎಂ.ವಿ.ವೆಂಕಟೇಶ್, ಕೆ.ಜನಾರ್ಧನ ಇದ್ದರು. ವ್ಯವಸ್ಥಾಪಕ ಹೆಚ್.ಆರ್.ವೆಂಕಟೇಶ್, ಮೇಲ್ವಿಚಾರಕ ರಾಮಕೃಷ್ಣಯ್ಯ ಇನ್ನಿತರರು ಉಪಸ್ಥಿತರಿದ್ದರು.
ಬಾಕ್ಸ್
ರಾಜ್ಯ ರಾಜಧಾನಿ ಬೆಂಗಳೂರು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬೆಳೆಯುವಲ್ಲಿ ಸೀತಾರಾಮ್ ಅವರ ಕೊಡುಗೆಯು ಅಪಾರವಾಗಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಇವರು ನೀಡಿರುವ ಕೊಡುಗೆ ಅಗಾಧವಾಗಿದೆ. ಕೇವಲ ನಮ್ಮ ಸಮುದಾಯಕ್ಕೆ ಮಾತ್ರವಲ್ಲದೆ ಎಲ್ಲಾ ಸಮುದಾಯಗಳಿಗೂ ಕೊಡುಗೆ ನೀಡಿದ್ದಾರೆ. ಹೀಗಾಗಿ ಇವರ ಹೆಸರು ಸದಾ ಸ್ಮರಣೆಯ ಎಂದು ಎಚ್.ಎ.ವೆಂಕಟೇಶ್ ತಿಳಿಸಿದರು.
