ಚಾಮುಂಡೇಶ್ವರಿ ದೇವಾಲಯಕ್ಕೆ ಎಲೆಕ್ಟ್ರಿಕ್‌ ವಾಹನ ದೇಣಿಗೆ

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು: ಭಾರತದ ಅತ್ಯಂತ ಪ್ರತಿಷ್ಠಿತ ಮತ್ತು ವಿಶ್ವಾಸಾರ್ಹ ಅಗರಬತ್ತಿ ತಯಾರಕ ಕಂಪನಿ ಆಗಿರುವ ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆ ದಸರಾ ಹಬ್ಬದ ಈ ಸಂದರ್ಭದಲ್ಲಿ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಎಲೆಕ್ನಿಕ್ ಬಗ್ಗೆಯನ್ನು ದೇಣಿಗೆ ನೀಡಿದೆ.
ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ.ರೂಪಾ ಅವರಿಗೆ ವಾಹನದ ಕೀಲಿಗಳನ್ನು ಹಸ್ತಾಂತರಿಸಿದರು. ಇದೇ ವೇಳೆ ಸಂಸ್ಥೆಯು ದುರ್ಗೇಶ್ವರಿ ನವರಾತ್ರಿ ಪ್ಯಾಕ್ ಅನ್ನು ಬಿಡುಗಡೆ ಮಾಡಿದೆ. ಈ ಪರಿಸರ ಸ್ನೇಹಿ ವಾಹನವು ಹಿರಿಯ ನಾಗರಿಕರು ಮತ್ತು ವಿಕಲಚೇತನ ಭಕ್ತರಿಗೆ ಸೇವೆ ಸಲ್ಲಿಸಲಿದ್ದು, ದೇವಸ್ಥಾನದ ಆವರಣದಲ್ಲಿ ಸುಲಭವಾಗಿ ಅತ್ತಿತ್ತ ಓಡಾಡಲು ನೆರವಾಗುತ್ತದೆ. ಸಮಾಜಕ್ಕೆ ಒಳಿತು ಮಾಡುವ ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆಯ ಪ್ರಯತ್ನದ ಭಾಗವಾಗಿ ಈ ದೇಣಿಗೆ ನೀಡಲಾಗಿದೆ.
ಈ ವಿಶೇಷ ಪ್ಯಾಕ್ ನಲ್ಲಿ ಸೂಕ್ಷ್ಮವಾಗಿ ಕೆತ್ತಲಾದ ದೇವಿಯ ಒಂಬತ್ತು ಪ್ರತಿಕೃತಿಗಳನ್ನು ನೀಡಲಾಗಿದ್ದು. ಪ್ರತಿಯೊಂದಕ್ಕೂ ಕಲರ್-ಕೋಡ್ ಕೋಲಂ ಸ್ಟ್ಯಾಂಡ್ (ಕುಶಲಕರ್ಮಿಗಳಿಂದ ರಚಿತ ಮರದ ಬಣ್ಣದ ಸ್ಟಾಂಡ್) ಒದಗಿಸಲಾಗಿದೆ. ನವರಾತ್ರಿಯ ಪ್ರತಿ ದಿನದ ಬಣ್ಣಕ್ಕೆ ಹೊಂದಿಕೊಳ್ಳುವ ಆಗರಬತ್ತಿ ಪ್ಯಾಕ್ ಗಳನ್ನೂ ನೀಡಲಾಗಿದೆ. ಈ ಸೆಟ್ ನೊಂದಿಗೆ ಗ್ರಾಫಿಕ್ ಪುಸ್ತಕ ಲಭ್ಯವಿದ್ದು, ಈ ಕೃತಿಯು ಪವಿತ್ರ ಶ್ಲೋಕಗಳನ್ನು ಒಳಗೊಂಡಿದೆ ಮತ್ತು ಜೊತೆಗೆ ಭಕ್ತಿಗೀತೆಗಳ ಯೂಟ್ಯೂಬ್ ಕ್ಯೂಆರ್ ಕೋಡ್ ಒದಗಿಸಲಾಗಿದೆ.
ಸೈಕಲ್ ಪ್ಯೂರ್ ಅಗರಬತ್ತಿಯ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್ ರಂಗಾ ಮಾತನಾಡಿ, “ಚಾಮುಂಡಿ ಬೆಟ್ಟ ಮೈಸೂರಿನ ಆಧ್ಯಾತ್ಮಿಕ ಹೃದಯ ಕೇಂದ್ರವಾಗಿದೆ. ದಸರಾ ಮತ್ತು ನವರಾತ್ರಿ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ದೇವಿಯ ಆಶೀರ್ವಾದ ಮತ್ತು ಶಾಂತಿ ಬಯಸಿ ಇಲ್ಲಿಗೆ ಬರುವ ಭಕ್ತರಿಗೆ ಸೇವೆ ಸಲ್ಲಿಸುವುದು ನಮಗೆ ದೊರೆತಿರುವ ಗೌರವ ಎಂದು ಭಾವಿಸುತ್ತೇವೆ. ಭಕ್ತಿ ಸಾರುವುದಕ್ಕೆ ವಯಸ್ಸು ಅಥವಾ ದೈಹಿಕ ಸಾಮರ್ಥ್ಯ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ ಎಲೆಕ್ಟ್ರಿಕ್‌ ವಾಹನ ನೀಡಲಾಗಿದೆ” ಎಂದು ಹೇಳಿದರು.

Share This Article
Leave a Comment