ಪಬ್ಲಿಕ್ ಅಲರ್ಟ್
ಮೈಸೂರು : ನಗರದ ಪ್ರತಿಷ್ಠಿತ ರ್ಯಾಡಿಸನ್ ಬ್ಲ್ಯೂ ಹೋಟೆಲ್ನಲ್ಲಿ ಗುರುವಾರದಿಂದ ಮೂರು ದಿನಗಳ ಕಾಲ ನಡೆಯುವ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ ನೀಡಲಾಯಿತು.
ಗೋಲ್ಡನ್ ಕ್ರೀಪರ್ ಸಂಸ್ಥೆಯ ಬಿ.ಎನ್.ಜಗದೀಶ ಮತ್ತು ಹೇಮಲತಾ ಜಗದೀಶ್ ಆಯೋಜಿಸಿರುವ ಈ ಪ್ರದರ್ಶನಕ್ಕೆ ಚಿತ್ರನಟಿ ಅಮೃತ ಪ್ರೇಮ್ ಸೇರಿ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು. ಮದುವೆ, ಹಾಗೂ ಶುಭಕಾರ್ಯಗಳಿಗೆ ಮೆರಗು ನೀಡಲು ಮೈಸೂರಿನಲ್ಲಿ ವಿನೂತನ ಆಭರಣ ಪ್ರದರ್ಶನ ಮತ್ತು ಮಾರಾಟವನ್ನು ಒಂದೇ ವೇದಿಕೆಯಲ್ಲಿ ಪ್ರಸ್ತುತಪಡಿಸಲಾಗಿದೆ.
ದೇಶದ ೩೦ ಅಗ್ರ ಶ್ರೇಣಿಯ ಆಭರಣ ತಯಾರಕರು ಈ ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ. ಮೊದಲ ದಿನವೇ ನೂರಾರು ಗ್ರಾಹಕರು ಪ್ರದರ್ಶನಕ್ಕೆ ಆಗಮಿಸಿ ಅಮೋಘವಾದ ಭಾರತೀಯ ಒಡವೆಗಳ ಉತ್ಸವದಲ್ಲಿ ಪಾಲ್ಗೊಂಡು ಆಭರಣಗಳನ್ನು ವೀಕ್ಷಿಸಿದರು. ಕೆಲವರು ಖರೀದಿಸಿ ಸಂತಸಪಟ್ಟರು.
ಆಭರಣ ಎಂದರೆ ಮಹಿಳೆಯರಿಗೆ ಅಚ್ಚುಮೆಚ್ಚಿನದಾಗಿದ್ದು, ನಂಬಿಕಸ್ತ ಹೂಡಿಕೆಯೂ ಆಗಿದೆ. ಈ ಮೇಳದಲ್ಲಿ ಪ್ರಶಸ್ತಿ ವಿಜೇತ ಹಾಗೂ ಹೆಸರಾಂತ ಆಭರಣ ಮಳಿಗೆಗಳವರು ಭಾಗವಹಿಸಿರುವುದು ವಿಶೇಷವಾಗಿತ್ತು. ಮೈಸೂರಿನ ಸುತ್ತ ಮುತ್ತಲಿನ ಜನರ ಅಭಿರುಚಿಯನ್ನು ಅರಿತು ಅವರ ಇಚ್ಛೆಗನುಗುಣವಾಗಿ ಆಭರಣಗಳನ್ನು ತಯಾರಿಸಲಾಗಿದೆ. ಮುಂದಿನ ದಿನಗಳಲ್ಲಿ ಬರುವಂತಹ ಹಬ್ಬ ಹರಿದಿನಗಳಿಗೆ ಹಾಗೂ ಮದುವೆ ಸಮಾರಂಭಗಳಿಗೆ ಆಭರಣ ಖರೀದಿಸಲು ಒಂದೇ ವೇದಿಕೆಯಲ್ಲಿ ಭಾರತದ ೩೦ ಹೆಸರಾಂತ ಆಭರಣ ಮಳಿಗೆಗಳು ಕಣ್ಣುಗಳಿಗೆ ರಸದೌತಣ ನೀಡಲಿವೆ ಎಂದು ಚಿತ್ರನಟಿ ನಟಿ ಅಮೃತ ಪ್ರೇಮ್ ಹೇಳಿದರು.
ಈ ಸಂದರ್ಭದಲ್ಲಿ ಗಣ್ಯರಾದ ವರ್ಷಾ ಬಲ್ಯಂಡ, ಡಾ.ತನುಜಾ, ಹೇಮಮಾಲಿನಿ ಲಕ್ಷ್ಮಣ, ಸಿ.ಟಿ.ಪಲ್ಲವಿ, ರವಿ, ಜ್ಯೋತಿ ಪ್ರೇಮ್, ಅಮೃತಾ ಪ್ರೇಮ್, ರಮ್ಯಾ ಕಾಂತರಾಜ್ ಅರಸ್, ಚೈತ್ರಾ ರಂಗಸ್ವಾಮಿ, ಕುಸುಮಾ ಜಗನಾಥ ಶೆಣೈ, ಅಮೃತಾ ಶೆಣೈ, ಅನುಷಾ ಶೆಣೈ ಮತ್ತಿತರರು ಇದ್ದರು.