ಆರ್ ಎಸ್ ಎಸ್ ಪಥಸಂಚಲನಕ್ಕೆ ಪತ್ರಿ ರೋಧ ಸಂಚನಲಕ್ಕೆ ನಿರ್ಧಾರ

Pratheek
2 Min Read

ಪಬ್ಲಿಕ್ ಅಲರ್ಟ್

ಮೈಸೂರು: ನಗರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥಸಂಚಲನಕ್ಕೆ ಅನುಮತಿ ನೀಡಿದರೆ ಪ್ರತಿರೋಧವಾಗಿ ಅಹಿಂದ ಸಂಘಟನೆಗಳು ಪಥ ಸಂಚಲನ ನಡೆಸಲಾಗುವುದು ಎಂದು ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿಯ ಅಧ್ಯಕ್ಷ ಎನ್.ಭಾಸ್ಕರ್ ಎಚ್ಚರಿಕೆ ನೀಡಿದರು.

ನಗರದ ಜಲದರ್ಶಿನಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ನಿರ್ಣಯ ಮಂಡಿಸಿದ ಮಾತನಾಡಿದ ಅವರು, ಸರ್ಕಾರಿ ಜಾಗಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೇರಿದಂತೆ ಖಾಸಗಿ ಸಂಘ-ಸಂಸ್ಥೆಗಳಿಗೆ ಕಾರ್ಯಕ್ರಮ ನಡೆಸಲು ಸರ್ಕಾರ ಅನುಮತಿ ಕಡ್ಡಾಯವೆಂದು ನಿಯಮ ರೂಪಿಸಿದೆ. ಆದರೆ, ಸರ್ಕಾರದ ನಿಯಮವನ್ನು ಲೆಕ್ಕಿಸದೆ ಆರ್‌ಎಸ್‌ಎಸ್ ಪಂಥ ಸಂಚಲನ ನಡೆಸುವ ಮೂಲಕ ಗಲಭೆ ಸೃಷ್ಟಿಸುತ್ತಿದೆ. ಸಂಘ ಪರಿವಾರದ ಪಥ ಸಂಚಲನಕ್ಕೆ ಪೊಲೀಸರು ಅವಕಾಶ ಕೊಡಬಾರದು ಎಂದು ಆಗ್ರಹಿಸಿದರು.

ಒಂದು ವೇಳೆ ಸಂಘ ಪರಿವಾರದ ಪಥ ಸಂಚಲನ ಮಾಡುವುದೆ ಆದರೇ ದಲಿತ, ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತ ಸಮುದಾಯಗಳ ವಿವಿಧ ಸಂಘಟನೆಗಳು ನೀಲಿ ಧ್ವಜದೊಂದಿಗೆ ಕೈಯಲ್ಲಿ ದೊಣ್ಣೆ ಹಿಡಿದು ಆರ್‌ಎಸ್‌ಎಸ್ ಪಥ ಸಂಚಲನ ಸಾಗುವ ದಾರಿಯಲ್ಲಿ ಅವರೊಂದಿಗೆ ನಾವು ಸಂಚಲನ ನಡೆಸುತ್ತೇವೆ. ನಮಗೂ ಅನುಮತಿ ನೀಡಬೇಕು ಎಂದು ಹೇಳಿದರು.

ಈ ವಿಚಾರದಲ್ಲಿ ಗ್ರಾಮೀಣ ಅಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಕರೆಗಳು, ಅವಾಚ್ಯವಾಗಿ ಮಾತನಾಡುವುದು, ಪ್ರಾಣ ಬೆದರಿಕೆ ಧಮ್ಕಿ ಹಾಕುವ ಕೃತ್ಯವನ್ನು ಸಂಘ ಪರಿವಾರದ ಪಟಾಲಾಂಗಳು ಮಾಡುತ್ತಿದ್ದಾರೆ. ಇದನ್ನು ಕೂಡಲೇ ನಿಲ್ಲಿಸದಿದ್ದರೆ ತಕ್ಕ ಪಾಠ ಕಲಿಸಲಾಗುವುದು. ಸಚಿವ ಪ್ರಿಯಾಂಕ್ ಖರ್ಗೆಯ ಪರವಾಗಿ ಸ್ವ ಪಕ್ಷ ಸಚಿವರು, ಶಾಸಕರು ಮಾತನಾಡದಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಿಯಾಂಕ್ ಖರ್ಗೆ ಅವರೊಂದಿಗೆ ಅಹಿಂದ ಸಮುದಾಯಗಳ ಬೆಂಬಲವಿದೆ. ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ಬಾಯಿ ಬಂದಂತೆ ಮಾತನಾಡುವುದನ್ನು ನಿಲ್ಲಿಸದಿದ್ದರೆ ನಿಮ್ಮ ವಿರುದ್ಧ ರಾಜ್ಯದಲ್ಲಿ ಉಗ್ರ ಹೋರಾಟ ನಡೆಯಲಿದೆ. ದಲಿತರ ಶಕ್ತಿ ಏನೆಂದು ನಿಮಗೆ ತಿಳಿಸಿಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 

ಜೊತೆಗೆ ಸುಪ್ರೀಂ ಕೊರ್ಟ್ ನ್ಯಾುಂದೀಶರ ಮೇಲೆ ವಕೀಲನೊಬ್ಬ ಶೂ ಎಸೆುಂಲು ುಂತ್ನಿಸಿದ ಘಟನೆ ಖಂಡಿಸಿದ ಅವರು ಶೋ ಎಸೆದ ವಕೀಲನ ವಿರುದ್ಧ ಕಾನೂನು ಕ್ರಮ ಜರುಗಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಒಳ ಮೀಸಲಾತಿ ವಿಚಾರದಲ್ಲಿ ದಲಿತ ಸಮುದಾಯಗಳ ಜಾತಿಗಳ ನಡುವೆ ಬೆಂಕಿ ಹಚ್ಚಿ ಸೌಹಾರ್ದತೆ ಕೆಡಿಸುತ್ತಿರುವ ಬಿ.ಆರ್.ಭಾಸ್ಕರ್ ಪ್ರಸಾದ್ ಮತ್ತು ವಕೀಲ ಅರುಣ್ ಕುಮಾರ್ ಕುತಂತ್ರದ ಹೋರಾಟವನ್ನು ನಿಲ್ಲಿಸಬೇಕು. ಹೊಲಯ ಸಮುದಾಯದ ಸಚಿವರ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುವುದನ್ನು ನಿಲ್ಲಿಸಬೇಕು. ಇಲ್ಲವಾದರೆ ಪರ್ಯಾಯ ಹೋರಾಟ ರೂಪಿಸಿ ನಿಮ್ಮ ಹಗೆತನದ ಹೋರಾಟವನ್ನು ಜನರಿಗೆ ತಿಳಿಸುವ ಕೆಲಸ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಂವಿಧಾನ ಸಂರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಎ.ಆರ್.ಕಾಂತರಾಜು, ಜಿಲ್ಲಾಧ್ಯಕ್ಷ ಗಂಗಾಧರ್, ನಗರಾಧ್ಯಕ್ಷ ಜೆ.ಪ್ರಭು, ವಿಜ್ಞಾನಿ ಕನಕರಾಜು, ದಲಿತ ಮುಖಂಡರಾದ ನಾಗರಾಜು, ಗುರುದೇವ್, ಸೂರ್ಯಕಾಂತ್, ಮಧು ಸಭೆಯಲ್ಲಿ ಹಾಜರಿದ್ದರು.

Share This Article
Leave a Comment