ಪಬ್ಲಿಕ್ ಅಲರ್ಟ್
ಮೈಸೂರು: ಸ್ಟ್ಯಾನ್ಲಿ ಪಾರ್ಕರ್ ಸ್ಕೂಲ್ ಆಫ್ ಮ್ಯೂಸಿಕ್ ವತಿಯಿಂದ ಅ. ೨೮ ರ ಸಂಜೆ ೪ ರಿಂದ ರಾತ್ರಿ ೯ ರವರೆಗೆ ನಂಜು ಮಳಿಗೆ ವೃತ್ತ ಬಳಿಯ ನಾದಬ್ರಹ್ಮ ಸಂಗೀತ ಸಭಾದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡ ಚಿತ್ರಗೀತೆ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ಸ್ಟ್ಯಾನ್ಲಿ ಪಾರ್ಕರ್ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಈ ವೇಳೆ ವಿವಿಧ ಕನ್ನಡ ಚಿತ್ರಗಳ ಸುಮಾರು ೬೦ ಗೀತೆ ಹಾಡಲಾಗುವುದು. ಸಂಸ್ಥೆಯ ೨೪ ವಿದ್ಯಾರ್ಥಿಗಳು ಹಾಗೂ ಇನ್ನಿತರ ಖ್ಯಾತ ಗಾಯಕರು ಪಾಲ್ಗೊಳ್ಳಲಿದ್ದಾರೆಂದರು.
ಎನ್. ಅಮರ್, ಯದುನಂದಂನ್, ದೇಮಪ್ಪ ಹಾಗೂ ಇನ್ನಿತರರು ಇದ್ದರು.
ಅ.28ಕ್ಕೆ ಕನ್ನಡ ಚಿತ್ರಗೀತೆ ಗಾಯನ
Leave a Comment
Leave a Comment
