ಪಬ್ಲಿಕ್ ಅಲರ್ಟ್
ಮೈಸೂರು: ತಾವು ಸಂಗ್ರಹಿಸಿರುವ ರಂಗ ತಂಡಗಳ ಭಿತ್ತಿಚಿತ್ರ ಪ್ರದರ್ಶನ ನ. ೩ ರಿಂದ ನ. ೯ ರವರೆಗೆ ವಿಜಯನಗರ ೨ ನೇ ಹಂತದ ಶ್ರೀ ಕಲಾ ನಿಕೇತನ ಮಹಾ ವಿದ್ಯಾಲಯದಲ್ಲಿ ಆಯೋಜಿಸಲಾಗಿದೆ ಎಂದು ಹಿರಿಯ ರಂಗಕರ್ಮಿ ರಾಜಶೇಖರ ಕದಂಬ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ನ. ೩ ರ ಬೆಳಗ್ಗೆ ೧೧ಕೆಕ ರಂಗಾಯಣ ಮಾಜಿ ನಿರ್ದೇಶಕ ಡಾ.ಸಿ. ಬಸವಲಿಂಗಯ್ಯ ಉದ್ಘಾಟಿಸುವರು, ಡಾ. ಮಾನಸ, ಅಂಶಿ ಪ್ರಸನ್ನಕುಮಾರ್, ಬಾಬುರಾವ್ ಕೆ.ಸಿ. ಮಹದೇವ ಶೆಟ್ಟಿ ಅತಿಥಿಗಳಾಗಿರುವರೆಂದರು.
ರAಗಾಯಣ, ನಟನ, ಕದಂಬ ರಂಗವೇದಿಕೆ, ಸಮತೆಂತೋ, ಕಲಾಸುರುಚಿ, ಅಮರಕಲಾ ಸಂಘ, ಕಲಾಪ್ರಿಯ, ನಿರಂತರ, ರಂಗವಲ್ಲಿ, ಅಪ್ರವರಂಬೆ, ಪರಿವರ್ತನ ಮೊದಲಾದ ಅಸಂಖ್ಯ ರಂಗ ತಂಡ, ಕಂಪನಿಗಳು ತಮ್ಮ ನಾಟಕಗಳಿಗಾಗಿ ಪ್ರದರ್ಶಿಸಿದ, ಸಿದ್ಧಪಡಿಸಿದ ಭಿತ್ರಿಚಿತ್ರಗಳು ಇವಾಗಿವೆ. ಸಾಕಷ್ಟು ಮಂದಿಯ ಬಳಿ ಇವು ಈಗ ಇಲ್ಲ, ಆದರೆ ತಾವು ಶ್ರಮಪಟ್ಟು ಸಂಗ್ರಹಿಸಿರುವ ಕಾರಣ ಉತ್ತಮ ದಾಖಲೆಗಳಾಗಿವೆ ಎಂದರು.
ಯು.ಎಸ್. ರಾಮಣ್ಣ, ಅಶ್ವvತ್ ಕದಂಬ, ಮದನ್ಕುಮಾರ್, ವಸಂತಶಾಸ್ತಿç, ಡಿ. ತಿಪ್ಪಣ್ಣ, ಪಾಲ್ ಹಾಜರಿದ್ದರು.
