ಪಬ್ಲಿಕ್ ಅಲರ್ಟ್
ಮೈಸೂರು: ಜಿಲ್ಲಾ ಪತ್ರಕರ್ತರ ಸಂಘದವತಿಯಿಂದ ಪತ್ರಿಕಾ ದಿನಾಚರಣೆ-2025ರ ಅಂಗವಾಗಿ ಸೆ.20ರಂದು ಹಿರಿಯ ಪತ್ರಕರ್ತರಿಗೆ ಅಭಿನಂದನೆ, ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ.
ಅಂದು ಬೆ.10.30ಕ್ಕೆ ಮಾನಸಗಂಗೋತ್ರಿಯ ರಾಣಿಬಹದ್ದೂರ್ ಸಭಾಂಗಣದಲ್ಲಿ ಸಮಾರಂಭ ನಡೆಯಲಿದ್ದು, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟನೆ ನೆರವೇರಿಸಲಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ಜಿ.ಟಿ.ದೇವೇಗೌಡ ಹಿರಿಯ ಪತ್ರಕರ್ತರಿಗೆ ಸನ್ಮಾನ ಮಾಡಲಿದ್ದಾರೆ. ಶಾಸಕ ಅನಿಲ್ ಚಿಕ್ಕಮಾದು ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿ ಪಡೆದ ಮಾಡಲಿದ್ದಾರೆ.
ವಿಧಾನಪರಿಷತ್ ಗೆ ನಾಮನಿರ್ದೇಶನಗೊಂಡಿರುವ ಹಿರಿಯ ಪತ್ರಕರ್ತ ಡಾ.ಕೆ.ಶಿವಕುಮಾರ್ ಗೆ ಸಮಾರಂಭದಲ್ಲಿ ವಿಶೇಷ ಅಭಿನಂದನೆ ಸಲ್ಲಿಸಲಾಗುತ್ತದೆ. ನ್ಯೂಸ್ 18 ಕನ್ನಡ ಸಂಪಾದಕ ಎ.ಹರಿಪ್ರಸಾದ್ ಪ್ರಧಾನ ಭಾಷಣ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಗೌಡ, ಕರ್ನಾಟಕ ಕಾರ್ಯಕನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಜಿಎಸ್ ಎಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಶ್ರೀಹರಿ ದ್ವಾರಕನಾಥ್ ಕಾರ್ಯಕ್ರಮಕ್ಕೆ ಆಗಲಿಸಲಿದ್ದಾರೆ ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್ ಮಾಹಿತಿ ನೀಡಿದ್ದಾರೆ.


ಪ್ರಶಸ್ತಿ ವಿವರ: ವರ್ಷದ ಕನ್ನಡ ವರದಿ ಪ್ರಶಸ್ತಿ ದಾ.ರಾ.ಮಹೇಶ್(ಆಂದೋಲನ), ವರ್ಷದ ಇಂಗ್ಲೀಷ್ ವರದಿ ಪ್ರಶಸ್ತಿ ಎ.ಗಣೇಶ್ (ಸ್ಟಾರ್ ಆಫ್ ಮೈಸೂರು), ವರ್ಷದ ಫೋಟೋಗ್ರಫಿ ಪ್ರಶಸ್ತಿ ಎಸ್.ಆರ್.ಮಧುಸೂದನ್(ಛಾಯಾಗ್ರಾಹಕ ಟೈಫ್ಸ್ ಆಫ್ ಇಂಡಿಯಾ), ಅತ್ಯುತ್ತಮ ಜಿಲ್ಲಾ ವರದಿಗಾರ ಟಿನ್ಟ್ ಪ್ರಶಸ್ತಿ ರವಿ ಪಾಂಡವಪುರ(ನ್ಯೂಸ್ ಫಸ್ಟ್), ಬೆಸ್ಟ್ ದಸರಾ ಕವರೇಜ್ ಟಿನ್ಟಿ ಪ್ರಶಸ್ತಿ ರಾಮ್(ಟಿವಿ9), ವರ್ಷದ ಹಿರಿಯ ವರದಿಗಾರ (ನಗರ) ವಿ.ಮಹೇಶ್ ಕುಮಾರ್ (ಜಸ್ಟ್ ಕನ್ನಡ), ವರ್ಷದ ಹಿರಿಯ ವರದಿಗಾರ( ಗ್ರಾಮಾಂತರ) ಟಿ.ಎ.ಸಾಧಿಕ್ ಪಾಷಾ(ಆಂದೋಲನ), ವರ್ಷದ ಹಿರಿಯ ಉಪಸಂಪಾದಕ ಕೆ.ಎಸ್.ಮಂಜುನಾಥಸ್ವಾಮಿ(ವಿಜಯಕರ್ನಾಟಕ), ವರ್ಷದ ಹಿರಿಯ ಛಾಯಾಗ್ರಾಹಕ ಎಸ್.ಉದಯ್ ಶಂಕರ್(ದಿನ್ಯೂ ಇಂಡಿಯನ್ ಎಕ್ಸ್ ಪ್ರೆಸ್), ವರ್ಷದ ಹಿರಿಯ ಪತ್ರಕರ್ತ ಸಿಎಂ ಮಧುಸೂದನ್(ಸುವರ್ಣ ನ್ಯೂಸ್) ಎಂದು ಪ್ರಶಸ್ತಿ ಸ್ವೀಕರಿಸುವರು.
