ಜಾತಿ ಸಮೀಕ್ಷೆ ಮೂಲಕ ಹಿಂದೂ ಸಮಾಜ ದುರ್ಬಲಗೊಳಿಸಲು ಯತ್ನ

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು: ಕರ್ನಾಟಕ ಹಿಂದುಳಿದ ಆಯೋಗ ಕೈಗೆತ್ತಿಕೊಂಡಿರುವ ಜಾತಿ ಗಣತಿಯನ್ನು ಹಿಂದುಳಿದ ಸಮಾಜಗಳ ಸಬಲೀಕರಣದ ಬದಲಿಗೆ  ಹಿಂದೂ ಧರ್ಮವನ್ನು ದುರ್ಬಲಗೊಳಿಸಲು ರಾಜ್ಯ ಸರಕಾರ ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್ ಹೈಕಮಾಂಡ್ ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಚಾಮರಾಜಕ್ಷೇತ್ರದ ಬಿಜೆಪಿ ಮುಖಂಡ ಡಾ.ಸುಶ್ರುತಗೌಡ ಆರೋಪಿಸಿದರು.
ಈ ಕುರಿತು ಪ್ರತಿಕ್ರಯಿಸಿರುವ ಅವರು, ಕ್ರೈಸ್ತ ಹಾಗು ಇಸ್ಲಾಂ ಧರ್ಮಗಳಿಗೆ, ಹಿಂದೂ ಧರ್ಮದಿಂದ  ಮತಾಂತರಗೊಂಡವರಿಗೆ  ಅವರ ಮೂಲ  ಜಾತಿಯನ್ನು ನಮೂದಿಸಲು ಅವಕಾಶ ನೀಡಿ, ಹಿಂಬಾಗಿಲ ಮೂಲಕ ಮೀಸಲಾತಿಯನ್ನು ದುರ್ಬಳಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಇದರ ಹಿಂದೆ ಬಹುದೊಡ್ಡ ಹಿಂದೂ ವಿರೋಧಿ ಸಂಚುಗಾರಿಕೆ ಇದೆ ಎಂದರು.
ಈ ಪ್ರಯತ್ನ ಎಷ್ಟು ಆತ್ಮಘಾತುಕವಾಗಿದೆ ಎಂದರೆ,  ಕ್ರೈಸ್ತ  ಧರ್ಮಕ್ಕೆ ಮತಾಂತರವಾದವರ ಮೂಲ ಜಾತಿ ಪಟ್ಟಿಯನ್ನು  ಬಹಿರಂಗಗೊಳಿಸಲಾಗಿದೆ. ಆದರೆ   ಇಸ್ಲಾಂ ಧರ್ಮಕ್ಕೆ ಮತಾಂತರವಾದವರ ಮೂಲ ಜಾತಿಯ ಬಗ್ಗೆ ರಹಸ್ಯ ಕಾಪಾಡಲಾಗಿದೆ. ಎರಡು ಧರ್ಮಗಳಲ್ಲಿ ಜಾತಿ ವ್ಯವಸ್ಥೆ ಇಲ್ಲವಾಗಿದ್ದರೆ,  ಈ ಮೂಲ ಜಾತಿಯನ್ನು ಸಮೀಕ್ಷೆ ಸಂದರ್ಭದಲ್ಲಿ  ನಮೂದಿಸುವ  ಅವಶ್ಯಕತೆ ಏನಿದೆ?,” ಎಂದು ಪ್ರಶ್ನಿಸಿದರು.
ರಾಜ್ಯದ ಜನತೆ  ಅಧಿಕಾರ  ಕೊಟ್ಟಾಗಲೆಲ್ಲಾ   ರಾಜ್ಯದ ಅಭಿವೃದ್ಧಿ ಕೆಲಸ ಮಾಡದೆ, ಜಾತಿ-ಧರ್ಮದ ಹೆಸರಿನಲ್ಲಿ ಸಮಾಜದ ಸಾಮರಸ್ಯ ಹಾಳು ಮಾಡುವುದರಲ್ಲೇ  ಕಾಂಗ್ರೆಸ್ ಹೈಕಮಾಂಡ್  ಕಾಲ ಕಳೆಯುತ್ತಿರುವುದು ದುರಂತ. ಕ್ರೈಸ್ತ-ಇಸ್ಲಾಂ ಧರ್ಮಗಳಿಗೆ ಮತಾಂತರಗೊಂಡವರಿಗೆ ಅವರ ಮೂಲ ಜಾತಿಯನ್ನು ನಮೂದಿಸಲು ಅವಕಾಶ ನೀಡಿ, ಭವಿಷ್ಯದಲ್ಲಿ ಅವರು ಕೂಡಾ ಬಡ ಹಿಂದುಳಿದವರ ಮೀಸಲಾತಿ ಕಬಳಿಸಲು  ಈ  ಮೂಲಕ ಅವಕಾಶ ನೀಡಲಾಗುತ್ತಿದೆ. ಇದು ಸಂವಿಧಾನ ಬಾಹಿರವೆಂದರು. 
ಕೇಂದ್ರ ಸರ್ಕಾರ ಈಗಾಗಲೇ ಹಿಂದುಳಿದವರ್ಗಗಳ ಗಣತಿಗೆ ನಿರ್ಧರಿ, ಆದೇಶ ಹೊರಡಿಸಿದೆ.  ಆ ಬಳಿಕವು ಸುಮಾರು  650 ಕೋಟಿ ರೂಪಾಯಿ  ವೆಚ್ಚ ಮಾಡಿ ರಾಜ್ಯ  ಸರ್ಕಾರ ತರಾತುರಿಯಲ್ಲಿ ಹಿಂದುಳಿದವರ್ಗಗಳ ಜನಗಣತಿ ಆರಂಭಿಸಿರುವುದರ ಹಿಂದೆ   ಹಿಂದೂ ಧರ್ಮೀಯರನ್ನು ಜಾತಿ ಹೆಸರಿನಲ್ಲಿ ಒಡೆದು ಆಳುವ ಕುಯುಕ್ತಿ ಇರುವಂತಿದೆ.  ಇದರ ಬದಲಿಗೆ  ಈ ಮೊತ್ತವನ್ನು ಬಡವರ ಕಲ್ಯಾಣಕ್ಕೆ ಬಳಸಬಹುದಿತ್ತು ಎಂದರು. 

Share This Article
Leave a Comment