ಆಕಾಶ್‌ನಿಂದ ಅತಿದೊಡ್ಡ ಪ್ರತಿಭಾನ್ವೇಷಣೆ ಪರೀಕ್ಷೆ

latha prabhukumar
2 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಆಕಾಶ್‌ನಿಂದ ಅತಿದೊಡ್ಡ ಪ್ರತಿಭಾನ್ವೇಷಣೆ ಪರೀಕ್ಷೆ
೧೦೦% ವರೆಗಿನ ವಿದ್ಯಾರ್ಥಿ ವೇತನ-?೨.೫ ಕೋಟಿ ನಗದು ಬಹುಮಾನ
ಮೈಸೂರು: ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್ (ಎಇಎಸ್‌ಎಲ್) ಎಎನ್‌ಟಿಎಚ್‌ಇ-೨೦೨೬ ಅನ್ನು ಪ್ರಾರಂಭಿಸಿದ್ದು, ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಲು ಮತ್ತು ಸ್ಪರ್ಧಾತ್ಮಕ ಯಶಸ್ಸಿಗೆ ಸಿದ್ಧರಾಗಲು ಸಹಾಯ ಮಾಡುವ ‘ಅತಿದೊಡ್ಡ ಪ್ರತಿಭಾನ್ವೇಷಣೆ ಪರೀಕ್ಷೆ’ ನಡೆಸಲು ಸಜ್ಜಾಗಿದೆ.
ಸೋಮವಾರ ಬೆಳಗ್ಗೆ ನಡೆದ ಸುದ್ದಿಗೋಷ್ಠಿಯಲ್ಲಿ ‘ಅಂತೆ’ ಪೋಸ್ಟರ್ ಬಿಡುಗಡೆ ಮಾಡಿ, ಈ ಬಗ್ಗೆ ಮಾಹಿತಿ ನೀಡಿದ ಹಿರಿಯ ಶೈಕ್ಷಣಿಕ ನಿರ್ದೇಶಕರಾದ ಡಾ ವಿಕ್ರಂ ಚಕ್ರವರ್ತಿ ಅವರು, ಎಎನ್‌ಟಿಎಚ್‌ಇ ಭಾರತದಲ್ಲಿ ಅತಿದೊಡ್ಡ ಮತ್ತು ಹೆಚ್ಚು ಅವಧಿಯ ಪ್ರತಿಭಾನ್ವೇಷಣೆ ಪರೀಕ್ಷೆಯಾಗಿದ್ದು, ಕಳೆದ ೧೬ ವರ್ಷಗಳಲ್ಲಿ ೧ ಕೋಟಿಗೂ ಹೆಚ್ಚು ವಿದ್ಯಾರ್ಥಿಗಳ ನೋಂದಣಿಯಾಗಿದೆ.ಪರೀಕ್ಷೆಯಲ್ಲಿನ ಪ್ರತಿಯೊಂದು ಪ್ರಶ್ನೆಯು ಉದ್ದೇಶಿತವಾಗಿದೆ, ವಿಷಯಗಳಾದ್ಯಂತ ನಿರ್ದಿಷ್ಟ ಪರಿಕಲ್ಪನೆಗಳು ಮತ್ತು ಸಾಮರ್ಥ್ಯಗಳನ್ನು ನಿರ್ಣಯಿಸಲು ವಿನ್ಯಾಸಗೊಳಿಸಲಾಗಿದೆ. ಎಂದರು.
ಅಕ್ಟೋಬರ್ ೧೧ರಿಂದ ಶುರುವಾಗಲಿರುವ ಈ ಪರೀಕ್ಷೆ ಅ.೩೦ಕ್ಕೆ ಅಂತ್ಯಗೊಳ್ಳಲಿದೆ. ಮತ್ತು ೮,೯ ಮತ್ತು ೧೦ನೇ ತರಗತಿಯ ಮಕ್ಕಳ ಪರೀಕ್ಷಾ ಫಲಿತಾಂಶ ನವೆಂಬರ್ ೧೮ರಂದು ಪ್ರಕಟಗೊಳ್ಳಲಿದೆ ಎಂದ ಅವರು, ಮೈಸೂರು, ಹುಣಸೂರು, ನರಸೀಪುರ, ನಂಜನಗೂಡು, ಚಾಮರಾಜನಗನರ ಸೇರಿದಂತೆ ಎಲ್ಲಾ ಭಾಗಗಳಲ್ಲೂ ಈ ಪರೀಕ್ಷೆ ಆಫ್ ಲೈನ್ ಹಾಗೂ ಆನ್ ಲೈನ್ ಮುಖಾಂತರ ನಡೆಸಲಾಗುತ್ತಿದ್ದು, ಅದರಲ್ಲೂ ಗ್ರಾಮೀಣ ಭಾಗದ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
“ನಮಗೆ, ಎಎನ್‌ಟಿಎಚ್‌ಇ ಕೇವಲ ವಿದ್ಯಾರ್ಥಿಯ ವಿದ್ಯಾರ್ಥಿವೇತನವನ್ನು ನಿರ್ಧರಿಸುವ ಪರೀಕ್ಷೆಯಾಗಿರಲಿಲ್ಲ. ಸರಿಯಾದ ಮಾರ್ಗದರ್ಶನವು ಅರ್ಥಪೂರ್ಣ ಬದಲಾವಣೆಯನ್ನು ತರಬಲ್ಲ ಹಂತದಲ್ಲಿ, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸಾಮರ್ಥ್ಯವನ್ನು ಅರಿತುಕೊಳ್ಳಲು ಸಹಾಯ ಮಾಡುವುದು ಇದರ ವಿಶಾಲ ಉದ್ದೇಶವಾಗಿದೆ. ಕಳೆದ ೧೬ ವರ್ಷಗಳಲ್ಲಿ, ಒಂದು ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ತಮ್ಮನ್ನು ತಾವು ಅಳೆದುಕೊಳ್ಳಲು ಮತ್ತು ತಮ್ಮ ಪ್ರಸ್ತುತ ಸ್ಥಿತಿಯನ್ನು ತಿಳಿದುಕೊಳ್ಳಲು ಎಎನ್‌ಟಿಎಚ್‌ಇ ಅನ್ನು ಒಂದು ಅವಕಾಶವಾಗಿ ನಂಬಿದ್ದಾರೆ. ಈ ಪರೀಕ್ಷೆಯು ಮೌಲ್ಯಯುತವಾಗಲು ಕಾರಣವೇನೆಂದರೆ, ಇದು ಕೇವಲ ವಿದ್ಯಾರ್ಥಿಯ ಅಂಕಗಳ ಬಗ್ಗೆ ಮಾತ್ರವಲ್ಲದೆ, ಅವರ ಸಾಮರ್ಥ್ಯಗಳು, ಸಿದ್ಧತೆ ಮತ್ತು ಸುಧಾರಣೆಯ ಅಗತ್ಯವಿರುವ ಕ್ಷೇತ್ರಗಳ ಬಗ್ಗೆ ಆಳವಾದ ಒಳನೋಟವನ್ನು ಒದಗಿಸುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಎಎನ್‌ಟಿಎಚ್‌ಇ ಪರೀಕ್ಷೆಯ ನಂತರ ತಮ್ಮ ಶೈಕ್ಷಣಿಕ ಪಯಣದ ಬಗ್ಗೆ ಹೆಚ್ಚಿನ ಸ್ಪಷ್ಟತೆಯನ್ನು ಮತ್ತು ಮುಂದಿನ ಹಾದಿಯ ಬಗ್ಗೆ ಉತ್ತಮ ತಿಳುವಳಿಕೆಯನ್ನು ಪಡೆದುಕೊಳ್ಳಬೇಕೆಂದು ನಾವು ಬಯಸುತ್ತೇವೆ ಎಂದು ವಿವರಿಸಿದರು.
ಬಳಿಕ ಮಾತನಾಡಿದ ಡಾ.ಶ್ರೀನಿವಾಸ ರೆಡ್ಡಿ ಹಾಗೂ ಸಂಜಯ್ ಅವರು, ಪ್ರಮುಖ ಫಲಿತಾಂಶಗಳಲ್ಲಿ ಒಂದಾದ ವಿದ್ಯಾರ್ಥಿವೇತನಗಳು, ಅರ್ಹ ವಿದ್ಯಾರ್ಥಿಗಳಿಗೆ ಆಕಾಶ್‌ನ (ಂಚಿಞಚಿsh) ‘ಕ್ಲಾಸ್‌ರೂಮ್’, ‘ಹೈಬ್ರಿಡ್’ ಮತ್ತು ‘ಡಿಜಿಟಲ್’ ಕಾರ್ಯಕ್ರಮಗಳ ಪ್ರಯೋಜನ ಪಡೆಯಲು ಅವಕಾಶ ಕಲ್ಪಿಸುತ್ತವೆ. ಎಎನ್‌ಟಿಎಚ್‌ಇ ೨೦೨೬ರಲ್ಲಿ, ಅನ್ವಯವಾಗುವ ಮಾನದಂಡಗಳಿಗೆ ಒಳಪಟ್ಟು ವಿದ್ಯಾರ್ಥಿಗಳು ೧೦೦% ವರೆಗಿನ ವಿದ್ಯಾರ್ಥಿವೇತನವನ್ನು ಪಡೆಯಬಹುದು; ಜೊತೆಗೆ, ಅತ್ಯುತ್ತಮ ಸಾಧನೆ ಮಾಡುವವರಿಗೆ ಒಟ್ಟು ೨.೫ ಕೋಟಿ ಮೌಲ್ಯದ ನಗದು ಬಹುಮಾನಗಳನ್ನೂ ನೀಡಲಾಗುತ್ತದೆ. ೫ ರಿಂದ ೧೨ನೇ ತರಗತಿಯ ವಿದ್ಯಾರ್ಥಿಗಳಿಗೆ ಮುಕ್ತವಾಗಿರುವ ಈ ಪರೀಕ್ಷೆಯು ಆನ್‌ಲೈನ್ ಮತ್ತು ಆಫ್‌ಲೈನ್ – ಎರಡೂ ವಿಧಾನಗಳಲ್ಲಿ ನಡೆಯಲಿದೆ ಎಂದರಲ್ಲದೇ, ಎಎನ್‌ಟಿಎಚ್‌ಇ ೨೦೨೬ಕ್ಕಾಗಿ ನೋಂದಣಿ ಪ್ರಕ್ರಿಯೆಯು ಈಗ ಅಧಿಕೃತ ಎಎನ್‌ಟಿಎಚ್‌ಇ ಪೋರ್ಟಲ್ ಹಾಗೂ ದೇಶಾದ್ಯಂತ ಇರುವ ಆಕಾಶ್ ಕೇಂದ್ರಗಳ ಮೂಲಕ ಆರಂಭವಾಗಿದೆ. ಆನ್‌ಲೈನ್ ಪರೀಕ್ಷೆಯು ೨೦೨೬ರ ಅಕ್ಟೋಬರ್ ೨೭ ರಿಂದ ನವೆಂಬರ್ ೧ರವರೆಗೆ ನಡೆಯಲಿದ್ದು, ಆಫ್‌ಲೈನ್ ಪರೀಕ್ಷೆಯು ೨೦೨೬ರ ಅಕ್ಟೋಬರ್ ೧೧, ೨೫ ಮತ್ತು ನವೆಂಬರ್ ೧ ರಂದು ನಡೆಯಲಿದೆ ಎಮದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹರಿಕೃಷ್ಣ, ಶ್ರಾವಣಿ, ಮುಬಾರಕ್, ಸೂರಜ್ ಮತ್ತು ಕಿಶೋರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Share This Article
Leave a Comment