ಸರಳ ಸಜ್ಜನಿಕೆಯ ಪ್ರಾಮಾಣಿಕ ರಾಜಕಾರಣಿ  ಟಿಎಸ್ ಶ್ರೀವತ್ಸ

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು: ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸರವರ ಹುಟ್ಟುಹಬ್ಬದ ಅಂಗವಾಗಿ ಅವರ ಹೆಸರಿನಲ್ಲಿ 101 ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಸಾರ್ವಜನಿಕರಿಗೆ ಸಿಹಿ ವಿತರಿಸಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಶ್ರಮ ವಹಿಸಲು ಶಾಸಕರಿಗೆ ಶಕ್ತಿ ನೀಡಲಿ ಎಂದು ಪ್ರಾರ್ಥಿಸಲಾಯಿತು.
ಇದೇ ಸಂಧರ್ಭದಲ್ಲಿ ಕೆಆರ್ ಕ್ಷೇತ್ರದ ಅಧ್ಯಕ್ಷ ಗೋಪಾಲ್ ರಾಜ್ ಮಾತನಾಡಿ, ಭಾರತೀಯ ಜನತಾ ಪಕ್ಷದ ತಳಮಟ್ಟದ ಬೂತ್ ಸಂಘಟನೆ ಕಾರ್ಯಕರ್ತರಾಗಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ಪಕ್ಷ ಸಂಘಟಿಸಿ ಶಾಸಕರಾಗಿ  ಟಿ.ಎಸ್.‌ಶ್ರೀವತ್ಸ ರವರ ನಾಯಕತ್ವದಲ್ಲಿ  ನೂರಾರು ಮಂದಿ ಮುಖಂಡರನ್ನು ಬೆಳೆಸಿದ್ದಾರೆ , ಮೂಡ ಭ್ರಷ್ಟಚಾರ ಪ್ರಕರಣ ಬಯಲಿಗೆ ತಂದು ಸರ್ಕಾರದ ಕೋಟ್ಯಾಂತರ ಆಸ್ಥಿಯನ್ನ ಮತ್ತು ಜನಸಾಮಾನ್ಯರ ತೆರಿಗೆ ಹಣವನ್ನ ಕಾಪಾಡಿದ್ದಾರೆಂದರು.
ನಂತರ  ಬಿಜೆಪಿ ಮುಖಂಡ ಪ್ರದೀಪ್ ಕುಮಾರ್ ಮಾತನಾಡಿ ಸಾಂಸ್ಕೃತಿಕ ನಗರಿಗೆ ಸಂಸ್ಕಾರಯುತ ಮತ್ತು ಸರಳ ಸಜ್ಜನಿಕೆಯ ಪ್ರಾಮಾಣಿಕ ರಾಜಕಾರಣಿಯಾಗಿ, ಮಾದರಿ ಜನಪ್ರತಿನಿಧಿಯಾಗಿ ಟಿ.ಎಸ್. ಶ್ರೀವತ್ಸ ರವರು ಕಾರ್ಯಕರ್ತರ ಶಕ್ತಿಯಾಗಿದ್ದಾರೆ, ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರದಲ್ಲಿ ಟಿ.ಎಸ್. ಶ್ರೀವತ್ಸ ರವರು ಸಚಿವರಾಗಬೇಕು ಮೈಸೂರಿನ ಅಭಿವೃದ್ಧಿಗಾಗಿ ಶಾಶ್ವತ ಯೋಜನೆಗಳನ್ನು ಜಾರಿಗೆ ತರಲು ಸಮರ್ಥರಾಗಿದ್ದಾರೆ ಎಂದರು
ಈ ಸಂದರ್ಭದಲ್ಲಿ ಕ್ಷೇತ್ರದ ಅಧ್ಯಕ್ಷ ಗೋಪಾಲ್ ರಾಜೇ ಅರಸ್, ಜಯಶಂಕರ್, ಜಯರಾಮ್. ಪ್ರದೀಪ್ ಕುಮಾರ್. ವಿಶ್ವೇಶ್ವರಯ್ಯ ಕೇಬಲ್ ಮಹೇಶ್, ನಗರಪಾಲಿಕೆ ಮಾಜಿ ಸದಸ್ಯರಾದ ಸೌಮ್ಯ ಉಮೇಶ್, ಶಾರದಮ್ಮ ಈಶ್ವರ್, ಬಿ.ವಿ.ಮಂಜುನಾಥ್, ಗೋಕುಲ್ ಗೋವರ್ಧನ್, ಕಿಶೋರ್, ಕೀರ್ತಿ, ಕೃಷ್ಣರಾಜ ಯುವ ಮೋರ್ಚಾ ಅಧ್ಯಕ್ಷ ಕೆ.ಎಂ.ನಿಶಾಂತ್, ರಾಜೇಶ್, ವಿನಯ್, ಪಾಂಚಜನ್ಯ ಟಿ.ಪಿ.ಮಧುಸೂಧನ್, ಅಜಯ್ ಶಾಸ್ತ್ರಿ, ಡಿ.ಪಿ.ಸುರೇಶ್, ಹರೀಶ್, ಉಪೇಂದ್ರ, ಜಗದೀಶ್, ಧನುಷ್, ಹರೀಶ್ಅಂಕಿತ್, ಹರ್ಷ, ರಾಜು, ಬೇಕರಿ ಚಂದ್ರು, ಚಂದ್ರಕಲಾ, ಲತಾ ಬಾಲಕೃಷ್ಣ, ಮಧುಶ್ರೀ, ಕವಿತಾ, ಲತಾ ಮುಂತಾದವರು ಉಪಸ್ಥಿತರಿದ್ದರು.

Share This Article
Leave a Comment