ಗಮನ ಸೆಳೆಯಲಿದೆ ‘ನಶಾ ಮುಕ್ತ ಕ್ಯಾಂಪಸ್” ಚಿತ್ರಯಾನ

Pratheek
1 Min Read

ಪಬ್ಲಿಕ್ ಅಲರ್ಟ್

ಮೈಸೂರು: ಈ ಬಾರಿ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸ್ತಬ್ಧಚಿತ್ರ ಮೆರವಣಿಗೆ ಗಮನ ಸೆಳೆಯಲಿದೆ. ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ರರ‍್ಶನಗೊಳ್ಳಲಿರುವ ‘ಆರೋಗ್ಯಕರ ಮನಸು-ನಶಾ ಮುಕ್ತ ಕ್ಯಾಂಪಸ್’ ಅಭಿಯಾನದ ಸ್ತಬ್ಧಚಿತ್ರ ದಸರಾ ಪ್ರವಾಸಿಗರಲ್ಲಿ ಜಾಗೃತಿ ಮೂಡಿಸಲಿದೆ. ದೇಶ-ವಿದೇಶದ ನಾನಾ ಭಾಗಗಳಿಂದ ಬರುವ ಪ್ರವಾಸಿಗರಲ್ಲಿ ದುಶ್ಚಟಗಳಿಂದ ಉಂಟಾಗುವ ಹಾನಿ ಹಾಗೂ ಅದರಿಂದ ಹೊರಗೆ ಬಂದಾಗ ಸಿಗುವ ಗೌರವ ಮತ್ತು ಸುಸ್ಥಿರ ಬದುಕಿನ ಬಗ್ಗೆ ಸ್ತಬ್ಧಚಿತ್ರ ಜಾಗೃತಿ ಮೂಡಿಸಲಿದೆ.
ಮಧು ಮೋಹನ್ ಆರ್ (ಇನ್‌ಕ್ಯೂಬ್) ವಿನ್ಯಾಸಗೊಳಿಸಿದ ಈ ಸ್ತಬ್ಧಚಿತ್ರದಲ್ಲಿ ದುಶ್ಚಟಗಳಿಗೆ ಒಳಗಾಗುವುದರಿಂದ ಹಿಡಿದು ಆ ವಿಷರ‍್ತುಲದಿಂದ ಪಾರಾಗುವವರೆಗಿನ ಪಯಣವನ್ನು ಚಿತ್ರಿಸಲಾಗಿದೆ. ೩ಆ ಸರಣಿ ದೃಶ್ಯಗಳ ಮೂಲಕ ಭರವಸೆ ಮತ್ತು ನಿರಾಸೆ ಎರಡು ಪರಸ್ಪರ ವಿರುದ್ಧವಾದ ಭಾವನಾತ್ಮಕ ಸಂರ‍್ಷಗಳನ್ನು ತೋರಿಸಲಾಗಿದೆ. ದುಶ್ಚಟಗಳು ಆರಂಭದಲ್ಲಿ ಕೊಡುವ ಮುದ ಹಾಗೂ ಅನಂತರದಲ್ಲಿ ಉಂಟಾಗುವ ಹಾನಿಯ ಚಿತ್ರಣಗಳ ಜೊತೆಜೊತೆಗೇ, ಈ ಚಟಗಳಿಂದ ಪಾರಾದ ನಂತರದ ಭರವಸೆಯ ಗೆಲುವಿನ ಚಿತ್ರಗಳೂ ಪ್ರರ‍್ಶನಗೊಳ್ಳಲಿವೆ.
ಈ ಬಗ್ಗೆ ಮಾತನಾಡಿದ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಸಿ.ಭಗವಾನ್, “ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ನಾವು ವಿದ್ಯರ‍್ಥಿಗಳ ಆರೋಗ್ಯ, ಭವಿಷ್ಯ ಹಾಗೂ ಸ್ವಾಸ್ಥ್ಯವನ್ನು ಉತ್ತೇಜಿಸುವ ಮತ್ತು ದುಶ್ಚಟಗಳ ವಿರುದ್ಧ ಸಮುದಾಯ ಭಾಗವಹಿಸುವಿಕೆಯನ್ನು ಪ್ರೇರೇಪಿಸುವ ೩ಆ ಸ್ತಬ್ಧಚಿತ್ರವನ್ನು ದಸರಾ ವೇದಿಕೆಯಲ್ಲಿ ಪ್ರದರ್ಶಿಸುತ್ತಿದ್ದೇವೆ ಎಂದು ತಿಳಿಸಿದರು.

ಹೀಗಿದೆ ಸ್ತಬ್ಧಚಿತ್ರ: ೩೦ ಅಡಿ ಉದ್ದ ಹಾಗೂ ೧೧ ಅಡಿ ಅಗಲ ಸುಮಾರು ೧೧ ಅಡಿ ೩ಆ ಕಲಾತ್ಮಕ ಚಿತ್ರಗಳನ್ನು ವಿನ್ಯಾಸಗೊಳಿಸಲಾಗಿದೆ. ಇದು ನಶೆಯಿಂದ ಪುನರುಜ್ಜೀವನದ ಪಯಣವನ್ನು ಶಕ್ತಿಶಾಲಿಯಾಗಿ ಹಾಗೂ ಕಥಾನಕವಾಗಿ ಪ್ರಸ್ತುತಪಡಿಸುತ್ತದೆ. ಕ್ಯಾನ್ಸರ್ ಉಂಟುಮಾಡುವ ಅಭ್ಯಾಸಗಳು, ದುಶ್ಚಟ ಮತ್ತು ಅವುಗಳ ಮನೋವೈಜ್ಞಾನಿಕ ಹಾಗೂ ದೈಹಿಕ ಪ್ರಭಾವಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ.

Share This Article
Leave a Comment